ಯಾರೋ ಬಂದರು ಹಾರಿ

ಯಾರೋ ಬಂದರು ಹಾರಿ
ಧಗೆಯ ಕುದುರೆಯನೇರಿ
ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ
ಬೂದಿಯಾದವು ಮೆಲ್ಲಗೆ

ಬೆಂಕಿಯಂಗಾಲಿಂದ
ತುಳಿದು ಕೆಂಡವ ಸುರಿದ
ಉರಿದು ಹೋದವು ಹೂವು ಚಿಗುರು
ಉಕ್ಕಿ ಹೋದವು ಹಾಲು
ಹೌಹಾರಿ ಹಾಯೆನಲು
ಬಿರಿದಾವು ಎದೆಯ ನೋವು – ಆಸೆಯೆ ಉರಿಗೆ
ತೆರೆದಾವು ಎದೆಯ ನೋವು

ನಿಂತ ನೀರಿನ ತು೦ಬ
ನೂರು ತಾರೆಯ ಬಿಂಬ
ನಡುಗಿ ನಿಡುಸುಯ್ದವು ಒಳಗೆ
ದೂರದ ಕಾಡಿನಲಿ
ಯಾಯಾರು ಸುಳಿಯದಲಿ
ಕಾದು ನಿಂತವು ಹೂಜೀವ – ಹಾ ಮಹದೇವ
ಬೂದಿಯಾದವು ಹೂಜೀವ
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೀತಿ ನೀತಿ (ಅಮೆರಿಕ)
Next post ನಗೆ ಡಂಗುರ – ೯೮

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys